ಪಯಣದ ಪ್ರಸಂಗಗಳು..

ಸುಮ್ಮನಿರುವುದು ಎಷ್ಟು ಕಷ್ಟ ಅನ್ನುವುದು ಯಾವಾಗಲೂ ಬ್ಯುಸಿಯಾಗಿ ಇರುತ್ತಿದ್ದವಳಿಗೆ ಅರಿವಿಗೆ ಬಂದಿದ್ದು ಆಗಲೇ.ಸಿಹಿ ಎಷ್ಟೇ ಮನಕ್ಕೆ ಮುದ ನೀಡಿದರೂ ಎಷ್ಟು ತಿನ್ನಬೇಕು ಅಷ್ಟೇ ತಿನ್ನಲು ಸಾಧ್ಯ. ಊಟವಿಡಿ ಸಿಹಿಯೇ ತುಂಬಿ ಹೋದರೆ ರುಚಿಸಲು ಸಾಧ್ಯವೇ?ರಜೆಯ ಈ ಸಿಹಿ ಸಾಕು ಸಾಕಾಗಿ ಹೋಗಿ,ಮನ ಮತ್ತೆ,ನನ್ನ ಬಸ್ ಪ್ರಯಾಣ,ಶಾಲೆಯ ಕೆಲಸ,ಮಕ್ಕಳ, ಸಹೋದ್ಯೋಗಿಗಳ ಸಹವಾಸಕ್ಕೆ ಕಾತರಿಸಿ,ಶಾಲೆ ಪ್ರಾರಂಭವಾದ ದಿನ ನಿರಾಳವೆನಿಸಿತು.